Sunday, 18 September 2016

ಕುಡಿಯುವ ನೀರು ನಮ್ಮೆಲ್ಲರ ಹಕ್ಕು - ಕಳಸಾ ಬಂಡೂರಿ ಹೋರಾಟವನ್ನು ಬೆಂಬಲಿಸಿ

ಒಂದು ವರ್ಷದಿಂದ ಜನರು ಕುಡಿಯುವ ನೀರಿಗಾಗಿ ಹೋರಾಟ ಮಾಡುತ್ತಿದ್ದಾರೆ ಎಂದರೆ ಅದು ನಿಜವಾಗಿಯೂ ನಾಗರಿಕ ಸಮಾಜ ತಲೆ ತಗ್ಗಿಸುವಂತದ್ದು. ಜನರ ಬದುಕಲು ಅತ್ಯಗತ್ಯವಾದ ಕುಡಿಯುವ ನೀರನ್ನು ಒದಗಿಸಲು ಸರ್ಕಾರದಿಂದ ಸಾಧ್ಯವಿಲ್ಲದಿದ್ದರೆ ಅಂತಹ ಸರ್ಕಾರಗಳಾದರೂ ನಮಗೇತಕ್ಕೆ? ಕಳಸಾ ಬಂಡೂರಿ ಬೆಂಬಲಿಸದ ಪ್ರತಿಯೊಬ್ಬ ರಾಜಕಾರಣಿಯೂ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು.

ಜನರು ಸಾಯುತ್ತಿದ್ದರೂ ನೋಡತ್ತ ಸುಮ್ಮನೆ ಕೂರಲು ಹೇಗಾದರೂ ಈ ರಾಜಕಾರಣಿಗಳಿಗೆ ಮನಸ್ಸಾಗುತ್ತದೆಯೋ. ತೆರಿಗೆ ಹಣವನ್ನು ಮನಬಂದಂತೆ ಪೋಲು ಮಾಡುವುದು ಬಿಟ್ಟರೆ ಇವರಿಗೆ ಬೇರೇನು ತಿಳಿದಿರುವಂತೆ ಕಾಣುವುದಿಲ್ಲ. ಹೇಗಾದರೂ ಹಣ ತಿಂದು ಸಾಯಲಿ ಕೊನೆಯ ಪಕ್ಷ ಜನರ ಕೂಗಿಗೆ ಸ್ಪಂದಿಸುತ್ತಾರೆಯೇ ಎಂದರೆ ಅದೂ ಇಲ್ಲ. ಇಂತಹ ದಂಡಪಿಂಡಗಳನ್ನು ಯಾವ ಭಾಷೆಯಲ್ಲಿ ಉಗಿಯಬೇಕು ಎಂಬುದೇ ತಿಳಿಯತ್ತಿಲ್ಲ.

ಕುಡಿಯುವ ನೀರು ಭೂಮಿಯ ಮೇಲೆ ಬದುಕಿರುವ ಪ್ರತೀ ಜೀವಿಗೂ ಅವಶ್ಯಕವಾಗಿ ಬೇಕಿರುವ ವಸ್ತು. ಮೂಕ ಪ್ರಾಣಿಗಳಿಗೆ ನೀರು ಸಿಗದ್ದಿದ್ದರೆ ಅವು ಸಾಯುತ್ತವೆ, ಆದರೆ ಮನುಷ್ಯನ ವಿಚಾರದಲ್ಲಿ ಹಾಗಲ್ಲ ಮನುಷ್ಯ ತನಗೆ ಬೇಕಿರುವುದನ್ನು ಕೇಳಿ ಪಡೆದುಕೊಳ್ಳುವ ಅವಕಾಶಗಳನ್ನು ಹೊಂದಿದ್ದಾನೆ ಮತ್ತು ಇದು ಆತನ ಹಕ್ಕು. ಆದರೆ ಇಂದು ಆಗುತ್ತಿರುವುದಾದರೂ ಏನು, ವರ್ಷಾನುಗಟ್ಟಲೆ ಹೋರಾಟ ಮಾಡಿದರೂ ಏನು ಕ್ರಮ ಕೈಗೊಳ್ಳದ ಈ ಸರ್ಕಾರ ಸುಮ್ಮನೆ ಕೇಳಿದರೆ ಕೊಡುತ್ತಾರೆಯೇ?. ಇಂತಹ ಎಮ್ಮೆ ಚರ್ಮದ ರಾಜಕಾರಣಿಗಳಿಗೆ ಮನವರಿಕೆ ಮಾಡಿಕೊಡಲು ಇಂದು ಜನರು ಹೋರಾಟ ಮಾಡಬೇಕಾಗಿದೆ ಕೆಲವು ಬಾರಿಯಂತು ಪ್ರಾಣವನ್ನೇ ಕೊಟ್ಟು ನಮಗೆ ಅಗತ್ಯವಾದದನ್ನು ಪಡೆದುಕೊಳ್ಳಬೇಕು. ಪರಿಸ್ಥಿತಿ ಹೀಗಿರುವಾಗ ಕಳಸ ಬಂಡೂರಿ ಹೋರಾಟ ಮಾತ್ರ  ಸರ್ಕಾರ ಮತ್ತು ರಾಜಕಾರಣಿಗಳ ಪಾಲಿಗೆ ಸೊಳ್ಳೆಯ ಕೂಗಿನಂತಾಗಿದೆ. ಜನರ ಕಷ್ಟಗಳಿಗೆ ಸ್ಪಂದಿಸದ ಇಂತಹ ರಾಜಕಾರಣಿಗಳು ನಿಮ್ಮ ಮನೆ ಬಾಗಲಿಗೆ ಓಟು ಕೇಳಲು ಬಂದಾಗ ಸಗಣಿಯಿಂದ ಅವರ ಮುಖಕ್ಕೆ ಬಾರಿಸಬೇಕು. ಗೂಟ ಕಿತ್ತುಕೊಂಡು ಒಡೆದರೂ ತಪ್ಪಲ್ಲ.

ಕಳಸಾ ಬಂಡೂರಿ ವಿಚಾರವಾಗಿ ದನಿ ಎತ್ತದ ಕರ್ನಾಟಕದ ೨೮ ಎಂ.ಪಿಗಳು ಎಲ್ಲಿದ್ದಾರೆ ಎಂದು ಯಾರಾದರೂ ಕೇಳಿದರೆ "ಜನರ ದುಡ್ಡಲ್ಲಿ ಮಜಾ ಮಾಡ್ತಾವ್ರೆ" ಎಂದು ಎಲ್ಲರೂ ಸರಾಗವಾಗಿ ಉತ್ತರಿಸುತ್ತಾರೆ. ಕೆಲವು ಎಂ.ಪಿಗಳು ಪ್ರಧಾನಿಯವರೊಡನೇ ಇದರ ಬಗ್ಗೆ ಚರ್ಚೆ ನಡೆಸಿದ್ದರು ಅದು ನೆಪಕ್ಕೋ, ಅವರ ಅಸ್ತಿತ್ವದ ವಿಚಾರಕ್ಕೋ ಇರಬಹುದು. ನಿಜವಾಗಿಯೂ ಕಳಸ ಬಂಡೂರಿ ಜನರ ಹಿತ ಕಾಯುವವರಾಗಿದ್ದರೇ ನಿರಂತರವಾಗಿ ಪ್ರಧಾನಿಯವರ ಮೇಲೆ ಒತ್ತಡ ತರಬೇಕಿತ್ತು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ೨೮ ಜನ ಎಂಪಿಗಳಲ್ಲಿ ೧೭ ಜನರು ಬಿಜೆಪಿ ಸಂಸದರು ಉಳಿದ ಹಾಗೆ ೯ ಕಾಂಗ್ರೆಸ್ ಹಾಗೂ ೨ ಜೆಡಿಎಸ್. ಬಹುಪಾಲು ಬಿಜೆಪಿಯವರೇ ಇದ್ದಾರೆ, ಕೇಂದ್ರದಲ್ಲಿ ಅವರದ್ದೇ ಸರ್ಕಾರವಿರುವಾಗ ತಮ್ಮದೇ ಸರ್ಕಾರದ ವಿರುದ್ಧ ಬಂಡಾಯವೇಳಲು ಇವರಿಗೆ ಸಾಧ್ಯವೇ? ಬಂಡಾಯವೆದ್ದರೆ ಇವರ ಕುರ್ಚುಗಳ ಗತಿಯೇನು? ಕೇಂದ್ರದಲ್ಲಿ ಸಚಿವರಾಗಿರುವ ರಾಜ್ಯದ ಸಂಸದರ ಪಾಡು ಏನಾಗಬೇಕು?. ಇನ್ನೂ ಕಾಂಗ್ರೇಸಿನವರನ್ನು ಕೇಳಿದರೆ ಕೇಂದ್ರದಲ್ಲಿ ಬಿಜೆಪಿಯವರು ಅಧಿಕಾರದಲ್ಲಿರುವಾಗ ನಾವೇನು ಮಾಡಲು ಸಾಧ್ಯ? ಎಂದು ನಮಗೆ ಪ್ರಶ್ನೆ ಕೇಳುತ್ತಾರೆ. ಹಾಗಿದ್ದರೇ ಹಿಂದೆ ಅಧಿಕಾರದಲ್ಲಿ ಇದ್ದವರು ಇದೇ ಕಾಂಗಿಗಳಲ್ಲವೋ? ಅವಾಗ ಏನು ಕಿಸಿದಿದ್ದಾರೆ?. ಈ ಜೆಡಿಎಸ್ ಅಂತು ಅತ್ತಲಾಗೂ ಇಲ್ಲ ಇತ್ತಲಾಗೂ ಇಲ್ಲ ಎಂಬಂತೆ ಇದೆ.

ಅಂದು ಸ್ವತಂತ್ರಕ್ಕಾಗಿ ಬ್ರಿಟೀಷರ ವಿರುದ್ಧ ಹೋರಾಟ ಮಾಡಿಯಾಯಿತು. ಇಂದು ಕುಡಿಯುವ ನೀರಿಗಾಗಿ ಕೇಂದ್ರ ಸರ್ಕಾರದ ಜೊತೆ ಗುದ್ದಾಡಬೇಕಿದೆ. ಕರ್ನಾಟಕದ ಜನರ ಸಮಸ್ಯೆಯನ್ನು ದೆಹಲಿ ಮಟ್ಟದಲ್ಲಿ ಎತ್ತಿ ಹಿಡಿದು ತೋರಿಸುವ ರಾಜಕಾರಣಿಗಳ ಕೊರತೆ ಇಂದು ನಮ್ಮ ರಾಜ್ಯದಲ್ಲಿದೆ. ಕೆಲವು ಅಂಡೆ ಪಿರ್ಕಿಗಳು ತಮ್ಮ ರಾಜಕೀಯ ಲಾಭಕ್ಕಾಗಿ ಕಳಸ ಬಂಡೂರಿ ವಿವಾದವನ್ನು ಬಳಸಿಕೊಳ್ಳುತ್ತಿದ್ದಾರೆ. ಇಂದು ಮಹದಾಯಿ ನದಿ ನೀರು ನ್ಯಾಯಾಧೀಕರಣ  ಕರ್ನಾಟಕದ ಮಧ್ಯಂತರ ಅರ್ಜಿ ವಜಾ ಮಾಡಿರುವುದಕ್ಕೆ ಇಲ್ಲಿಯ ೨೮ ಸಂಸದರು, ರಾಜ್ಯ ಸರಕಾರ  ಹಾಗೂ ಕೇಂದ್ರ ಸರಕಾರಗಳೇ ನೇರ ಕಾರಣ.  ಯಾವ ಅನ್ನ ತಿನ್ನುವ ರಾಜಕಾರಣಿ ಇದುವರೆಗೂ ಕಳಸಾ ಬಂಡೂರಿ ಬೆಂಬಲಿಸಿದ್ದಾನೆ ಹೇಳಿ? ನಾಚಕೆ ಮಾನ ಮರ್ಯಾದೆ ಬಿಟ್ಟು ನಿಂತಿರುವ ಈ ದರಿದ್ರ ರಾಜಕಾರಣಿಗಳಿಕೆ ಬೇಕಿರುವುದು ಹಣ ಮತ್ತು ಅಧಿಕಾರವೇ ಹೊರತು ಜನರ ಕಷ್ಟ ಸುಖವಲ್ಲ.
ಕಳಸಾ ಬಂಡೂರಿ ವಿವಾದ ಬಗೆಹರಿಯವವರೆಗೂ ತಮಿಳು ನಾಡಿಗೆ ಕಾವೇರಿ ನೀರು ಬಿಡುವುದನ್ನು ನಿಲ್ಲಿಸಬೇಕು, ಗೋವ ಹೆದ್ದಾರಿಯನ್ನು ಸಂಪೂರ್ಣ ಬಂದ್ ಮಾಡಬೇಕು ಆಗಲಾದರೂ ಕೇಂದ್ರ ಸರ್ಕಾರ ಕಣ್ಣು ತರೆಯುತ್ತ ನೋಡೋಣ.

"ಜೈ ಜವಾನ್ ಜೈ ಕಿಸಾನ್" ಎಂದು ಹೇಳುವ ಸರ್ಕಾರ ರೈತನನ್ನು ಸಹ ಸೈನಿಕನಂತೆ ಗೌರವಿಸಬೇಕು. ಇಂದು ನಮ್ಮ ಕಳಸಾ ಬಂಡೂರಿ ಭಾಗದ ರೈತರು ಕೇಳುತ್ತಿರುವುದು ಕುಡಿಯುವ ನೀರಲ್ಲದೇ ಬೇರಾವ ಸವಲತ್ತುಗಳನ್ನು ಅಲ್ಲ. ಇದನ್ನೂ ಮಾಡದ ಸರ್ಕಾರ ಇದ್ದರೆಷ್ಟು ಹೋದರೆಷ್ಟು?. ಕಳಸಾ ಬಂಡೂರಿ ಯೋಜನೆಯಿಂದ ಪ್ರಯೋಜನ ಪಡೆಯುವ ಧಾರವಾಡ, ಬೆಳಗಾವಿ ಮತ್ತು ಗದಗ ಭಾಗದ ಸಂಸದರುಗಳೆಲ್ಲಾ ಬಿಜೆಪಿಯವರೇ ಇರುವಾಗ ಇವರು ನಿಜವಾಗಿಯೂ ಈ ಯೋಜನೆಯನ್ನು ಬೆಂಬಲಿಸುತ್ತಾರೆಯೇ?

ಇಂತಹ ರಾಜಕಾರಣಿಗಳಿಗೆ ಬಿಸಿ ಮುಟ್ಟಿಸಬೇಕಾದರೆ ಪ್ರತಿಯೊಬ್ಬ ಕನ್ನಡಿಗನೂ ಕಳಸಾ ಬಂಡೂರಿ ಯೋಜನೆಯನ್ನು ಪಕ್ಷಾತೀತವಾಗಿ ಬೆಂಬಲಿಸಬೇಕು.
#KalasaBanduri

No comments:

Post a Comment